ಹೆತ್ತಮ್ಮ

ಹೆತ್ತವಳು ಹೊತ್ತವಳು
ಎದೆಯ ರಕ್ತವ ಉಣಿಸಿ
ಮಮತೆ ಧಾರೆಯ ಹರಿಸಿ
ಬಾಳ ಬವಣೆಗೆ ಬಳಲಿ
ಬೆಂಡಾಗಿ ನುಗ್ಗಾಗಿ ಕಷ್ಟಕ್ಕೆ
ಕಲ್ಲಾಗಿ ಸೆಟೆದು ನಿಂತವಳು ನನ್ನಮ್ಮ

ಕರುಳ ಕುಡಿಗಳಿಗಾಗಿ
ದೇಹ ಸೋತರೂ
ಹೋರಾಡಿ ಗೆದ್ದವಳು
ಕಷ್ಟಕ್ಕೆ ಕಂಗೆಟ್ಟು ಬೆದರಿ ಬಂದಗ
ಸರಿತಪ್ಪುಗಳ ಮದ್ಯೆ
ದ್ವಂದ್ವ ನಿಂತಾಗ ಒತ್ತಾಸೆ – ನನ್ನಮ್ಮ

ತಪ್ಪು ನಡೆದಾಘ ಕೆರಳಿ
ಸುಳ್ಳು ನಡೆದಾಗ ಮುನಿದು
ದಿಟ ನಡೆಯ ನಿಜ ನುಡಿಯ
ತಿದ್ದಿ ತೀಡಿದವಳು ನನ್ನಮ್ಮ

ಒರಟು ತನದಲಿ
ತಟ್ಟಿ ಎಚ್ಚರಿಸಿ ತನ್ನ ಕುಡಿಗಳ
ಬದುಕ ಕಟ್ಟಿಕೊಟ್ಟವಳು

ಕತ್ತಲೆಯಲ್ಲೆ ಬದುಕಿ
ಎಲೆಮರೆಯ ಕಾಯಾಗಿ
ತ್ಯಾಗಮಯಿಯಾದಳು
ಸಹಜ ಸಾವನು ಬಯಸಿ
ವೈಕುಂಟ ಕಂಡವಳು
ಅಮ್ಮ ಪದಕ್ಕೆ ಹೆಮ್ಮೆ
ನಿಜಕ್ಕೂ ನನ್ನಮ್ಮ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದ್ವಿಮುಖ
Next post ಯಕ್ಷಿಗಳೂ ತಾಳೆಮರಗಳೂ

ಸಣ್ಣ ಕತೆ

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

cheap jordans|wholesale air max|wholesale jordans|wholesale jewelry|wholesale jerseys